Thursday, 24 August 2017

ಗಣಪತಿ ಬಪ್ಪ ಮೋರೆಯಾ

*ಗಣೇಶ ಮೂಲದಲ್ಲಿ ಜನಪದರ ಕಲ್ಪನೆಯಲ್ಲಿ ಸಂಪೂರ್ಣವಾಗಿ ಮೈತೆಳೆದು ನಿಂತವನು.ಹಾಗಾಗಿ, ಗೌರಿ ಗಣೇಶನ ಆಚರಣೆಗಳು ಗ್ರಾಮ್ಯ ಸೊಗಡುಗಳಾದ ಮಣ್ಣು, ಗರಿಕೆ, ಬಳೆ, ತರಕಾರಿ, ಇಲಿ ಇವುಗಳ ಕಲ್ಪನೆಯಲ್ಲಿಯೇ ಜೀವ ತೆಳೆಯುತ್ತವೆ ಅನ್ನುವುದು ಗಮನಿಸ ಬೇಕಾದ ಅಂಶ.*

*ಜ್ಞಾನ ಹಾಗೂ ಕ್ರಿಷಿ ಜೀವನದಲ್ಲಿ ಅತಿ ಅಗತ್ಯವಾದುದು. ಇವೆರಡಕ್ಕೂ ಅಧಿದೇವತೆಯಾದ ಏಕೈಕ ದೇವರು "ಗಣೇಶ".*

*ಮಳೆಗಾಲ ಕ್ರಿಷಿಗೆ ಸೂಕ್ತ ಸಮಯ ಆವಾಗಲೇ ಗಣೇಶನ ಹಬ್ಬ.*
*ಮಣ್ಣು ಕ್ರಿಷಿಗೆ ಅತಿ ಅಗತ್ಯ ಅದರಿಂದಲೇ ಆತನ ತಯಾರಿ.*
*ಮಳೆಗಾಲದಲ್ಲಿ ಸಮ್ರದ್ಧವಾಗಿ ಆಗುವ ಗರಿಕೆ ಅವನಿಗೆ ಅರ್ಪಿತ.*
*ಇಲಿ ರೈತನಿಗೆ ತೊಂದರೆ ಕೊಡುವ ಪ್ರಾಣಿ ಅದನ್ನು ತನ್ನ ವಾಹನವಾಗಿಸಿ ಇಲಿಯನ್ನು ಮರ್ಧಿಸುವ ಸಂಕೇತ.*
*ಧವಸ ಧಾನ್ಯ ಶುದ್ಧೀಕರಿಸುವ ಮೊರದಂತಹ ಕಿವಿ.*
*ಹೊಟ್ಟೆ ಧವಸ ಧಾನ್ಯ ತುಂಬುವ ಕಣಜದ ಸಂಕೇತ.*
*ಹಾವು ರೈತ ಸ್ನೇಹಿ ಅದನ್ನು ಹೊಟ್ಟೆಗೆ ಕಟ್ಟಿ ಕ್ರಿಷಿ ರಕ್ಷಣೆಯ ಸಂದೇಶ ನೀಡುತ್ತಾನೆ ನಮ್ಮ "ಕ್ರಿಷಿ ಗಣಪ".*

*ಇನ್ನು ವಿದ್ಯಾ ಗಣಪನ ರೂಪ*
*ಮೊರದಂತಹ ಕಿವಿ ಕೇಳಿದ್ದನ್ನು ಜಾಲಿಸಿ ಒಳ್ಳೆಯದನ್ನಷ್ಟೇ ಸ್ವಿಕರಿಸು.*
*ಸಣ್ಣ ಕಣ್ಣು ಸೂಕ್ಷ್ಮ ಪರಿಶೀಲನೆ.*
*ದೊಡ್ಡ ಹೊಟ್ಟೆ ಜ್ಞಾನ ದಾಹ.*
*ಉದ್ದ ಸೊಂಡಿಲು ಅಗಾಧ ಗ್ರಹಿಕೆ.*
*ಇಲಿ ಚಂಚಲ ಮನಸ್ಸನ್ನು ಪ್ರತಿನಿಧಿಸುತ್ತದೆ ಅದನ್ನು ಹಿಡಿತದಲ್ಲಿ ಇಟ್ಟಾಗ ಯಶಸ್ಸು ಎಂಬ ಸಿಹಿಯಾದ ಮೋದಕ ಜೀವನದಲ್ಲಿ ಪಡೆಯಲು ಸಾಧ್ಯ.*
*ಇದು ಗಣೇಶನ ವಿದ್ಯಾ ರೂಪ*

*ಗಣೇಶನ ತಯಾರಿ ಮಳೆಗಾಲದ ಮುಂಚೆ ಆರಂಭವಾಗುತ್ತದೆ, ಅದಕ್ಕಾಗಿ ಮಣ್ಣುಗಳನ್ನು ಕೆರೆಗಳಿಂದಲೇ ತರುವುದು ಮಳೆಗಿಂತಲೂ ಮುನ್ನ ಕೆರೆಯ ಹೂಳು ತೆಗೆಯುವುದಕ್ಕೂ ಮಳೆಯ ತಯಾರಿಯೂ ಆಗುತ್ತದೆ. ಗಣೇಶನ ಹಬ್ಬ ಸಮ್ರದ್ಧ ಮಳೆಯ ನಡುವಿನಲ್ಲಿ, ಹಾಗಾಗಿ ಮಳೆ ಸುರಿದು ಕೆರೆ ತುಂಬಿ ಕೋಡಿ ಒಡೆಯುವ ಸಂದರ್ಭದಲ್ಲಿ ಅದೇ ಕೆರೆಗೆ ವಿಸರ್ಜಿಸಿದ ಗಣಪತಿಯ ಮಣ್ಣು ಕೆರೆಯ ಕೋಡಿ ಒಡೆಯದಂತೆ ತಡೆಯುತ್ತದೆ ಹೀಗೆ ಗಣೇಶ ನಮ್ಮನ್ನು ಕಾಪಾಡುತ್ತನೆ.*

*ಮಣ್ಣಿನ ಮಗಳಾದ ಪಾರ್ವತಿಯು ಪ್ರಕ್ರಿತಿ ತತ್ವದವಳು ಮತ್ತು ಆಕೆಯ ಮಗ ಮಣ್ಣಿನಿಂದ ತಯಾರಾಗುವುದು ಮತ್ತು ಪ್ರಕ್ರಿತಿಯು ಮಳೆ ಸುರಿದು  ನಳನಳಿಸುತಿರುವ ಗಳಿಗೆಯಲ್ಲಿ  ಬರುವ ಆತನ ಹಬ್ಬ ಆತನ ಪ್ರಕ್ರಿತಿ ತತ್ವವನ್ನು ತೋರಿಸುತ್ತದೆ.*

*ತಂದೆಯಾದ ಶಿವನು ಅತ್ಯಂತ ಜಟಿಲನೂ ಗೂಢನೂ ಆಗಿರುವಾಗ ಆತನ ಮಗ ಗಣೇಶ ಅಷ್ಟೇ ಸುಲಭದಲ್ಲಿ ಅರ್ಥವಾಗುವ ಮಹಾಕಾಯ. ಆದುದರಿಂದಲೇ ಚಿತ್ರಕಾರರು ಆತನನ್ನು ಗೆರೆಗಳಲ್ಲೂ ಬಿಡಿಸಿ ತೋರಿಸಬಲ್ಲರು ಅರ್ಥಾತ್ ಭಕ್ತಿ ಇದ್ದಲ್ಲಿ ಅಷ್ಟು ಸುಲಭದಲ್ಲಿ ಗಣಪತಿ ನಮಗೆ ದಕ್ಕುತ್ತಾನೆ, ಗರಿಕೆಗೂ ಒಲಿಯುತ್ತಾನೆ ಎನ್ನುವುದು ಇದಕ್ಕೆ ಅಲ್ಲವೆ.*

*ರಾಮಾಯಣ, ಮಹಾಭಾರತಗಳಲ್ಲೂ ಆತನ ಶಕ್ತಿಯನ್ನು ಕೊಂಡಾಡಿದ್ದಾರೆ. ಸ್ವತಃ ರಾಮ, ಕ್ರಿಷ್ಣರೂ ವಿಘ್ನ ನಿವಾರಣೆಗಾಗಿ ಆತನನ್ನೇ ಪೂಜಿಸಿದ್ದಾರೆ. "ಬದುಕಿನಲ್ಲಿ ಇನ್ನೇನು ಎಲ್ಲವೂ ಮುಗಿದೇ ಹೋಯಿತು ಎಂಬ ಅಸಹಾಯಕ ಪರಿಸ್ಥಿತಿಯಲ್ಲಿ ಒಮ್ಮೆ ಆ ಗಜಮುಖನನ್ನು ಭಕ್ತಿಯಿಂದ ನೆನೆದಲ್ಲಿ ಘಟನೆಗಳೇ ಬದಲಾಗಿ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಕ್ರಿಷ್ಣನೇ ಒಂದೆಡೆ ಹೇಳುತ್ತಾನೆ. ಎಷ್ಟಾದರೂ ಶಮಂತಕ ಮಣಿ ಕದ್ದ ಆರೋಪದಿಂದ ಕ್ರಿಷ್ಣ ಮುಕ್ತನಾದದ್ದು ಇದೇ ಗಣಪತಿಯ ನೆನೆದು ಅಲ್ಲವೆ.*

ಹೀಗೆ ಜ್ಞಾನ ಮತ್ತು ಕ್ರಿಷಿಯ ಅಧಿದೇವತೆಯಾದ ಗಣೇಶನು ಎಲ್ಲರಿಗೂ ಶುಭತರಲಿ. ಗಣೇಶ ಚರ್ತುಥಿಯ ಹಾರ್ದಿಕ ಶುಭಾಶಯಗಳು. 🌰🌰

ಪರಿಕಲ್ಪನೆ:  "ಯೋಗೀಶ್ ಮಲ್ಲಿಗೆಮಾಡು"

No comments:

Post a Comment

Note: only a member of this blog may post a comment.