Monday, 28 August 2017

ರಾಧಾಷ್ಟಮಿ

*ಭಾದ್ರಪದ ಮಾಸದ ಶುಕ್ಲಪಕ್ಷದ ಅಷ್ಟಮಿಯನ್ನು "ರಾಧಾ ಅಷ್ಟಮಿ" ಎಂದು ಕರೆಯಲಾಗುತ್ತದೆ*.

*ರಾಧೆಯನ್ನು ರಾಧಿಕ ರಾಧಾರಾಣಿ ಎಂದೂ ಕರೆಯಲಾಗುತ್ತದೆ*.

*ಮೂಲ ಮಹಾಭಾರತದಲ್ಲಿ "ರಾಧಾ" ಎಂಬ ಏಕವ್ಯಕ್ತಿ ಪಾತ್ರ ಇಲ್ಲದಿದ್ದರೂ  ತದನಂತರದಲ್ಲಿ ವಿಶೇಷವಾಗಿ ಗೀತಗೋವಿಂದದಲ್ಲಿ "ರಾಧಾ" ಎಂಬ ಒಂದು ಪಾತ್ರ ಮೈತೆಳೆದು ನಿಲ್ಲುತ್ತದೆ*.

*ರಾಧಾ ಕೇವಲ ಒಂದು ಪಾತ್ರವಾಗಿ ಕಾಣುವುದಕ್ಕಿಂತಲೂ ಆಕೆ ಗೋಪಿಕೆಯರನ್ನು ಪ್ರತಿನಿಧಿಸುತ್ತಾಳೆ*.

*ಇಂದು ರಾಧೆ ಇಲ್ಲದ ಕೃಷ್ಣನನ್ನು ಕಲ್ಪಿಸುವುದು ಸಾಧ್ಯವಿಲ್ಲ ಎನ್ನುವಾಗ ಆ ಪಾತ್ರದ ಮಹತ್ವ ಮತ್ತು ಪ್ರಾಮುಖ್ಯ ಅರ್ಥವಾಗುತ್ತದೆ*.

*ಕೃಷ್ಣನ ಮೇಲಿನ ರಾಧೆಯ ಒಲವನ್ನು ಆಧ್ಯಾತ್ಮಿಕ ನೆಲೆಯಲ್ಲಿ ಕಾಣಲಾಗುತ್ತದೆ. ಅರ್ಥಾತ್ ಪ್ರತಿ ಮನುಷ್ಯನ ಭಗವಂತನೆಡೆಗಿನ ಭಕ್ತಿ ಅದು ರಾಧೆಯ ಪ್ರೀತಿಯಂತೆ ಸಾತ್ವಿಕವೂ ಸಹಜವೂ ಆಗಿರಬೇಕು. ಆಗ ಪ್ರತಿ ಒಬ್ಬರೂ ರಾಧೆಯರೇ*.

*ರಾಧೆ ಎಂಬ ಶಬ್ಧವೂ ಬಹಳ ಸುಂದರವಾದದ್ದು. ಸಾಮಾನ್ಯವಾಗಿ ನಾವು ರಾಧೆಕೃಷ್ಣ ಎನ್ನುತ್ತೇವೆ, ಆ ಶಬ್ಧವನ್ನು ಖಂಡರಿಸಿದಾಗ ಅದು ರಾಹ್ ದೇ ಕೃಷ್ಣ ಆಗುತ್ತದೆ ಅರ್ಥಾತ್ ರಾಹ್ (ದಾರಿ) ದೇ (ತೋರು) ಕೃಷ್ಣಾ ಎಂದು*.

*ರಾಧೆ ಭಗವಂತನೆಡೆಗಿನ ಸಾತ್ವಿಕ ಬಯಕೆಯನ್ನು, ಆತ್ಮ ಪರಮಾತ್ಮನೊಂದಿಗೆ ಬೆಸೆದುಕೊಳ್ಳುವ ಕಲ್ಪನೆಯನ್ನು ನಿರೂಪಿಸುತ್ತದೆ*

*ಐಹಿಕ ಬದುಕಿನ ಜಂಜಾಟದಲ್ಲಿ ಶಾಶ್ವತ ಸತ್ಯವಾದ ಕೃಷ್ಣನ ಹುಡುಕಾಟದಲ್ಲಿರುವವರಿಗೆ  ರಾಧೆಯು ದಾರಿಯನ್ನು ತೋರಲಿ.*

ರಾಧಾಷ್ಟಮಿಯು ಭಗವಂತನೆಡೆಗಿನ ನಮ್ಮ ಆಧ್ಯಾತ್ಮಿಕ ಪ್ರೇಮವನ್ನು ಮತ್ತಷ್ಟು ಪ್ರೌಢ ಮತ್ತು ಪರಿಪಕ್ವ ಗೊಳಿಸಲಿ ಎಂದು ಆಶಿಸುತ್ತಾ ರಾಧಾಷ್ಟಮಿಯ ಶುಭಾಶಯಗಳು

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.