ಇಲ್ಲಿಗೆ ನವದುರ್ಗೆಯರ *ಅವತಾರಗಳ ವಿಶ್ಲೇಷಣೆಗೆ* ವಿರಾಮ ಹೇಳುತ್ತಾ.....
ಹೀಗೆ ನವರಾತ್ರಿಯಲ್ಲಿ ನವದುರ್ಗೆಯರ *ಸ್ಮರಣೆ, ಪಠನೆ, ಸಂಕೀರ್ತನೆಗಳಿಂದ* ಬದುಕಿನ ಜಂಜಡಗಳನ್ನು ದಾಟಿ ಬರುವುದೇ *ವಿಜಯ.* ತಸ್ಮಾತ್ *ವಿಜಯದಶಮಿ* ಪ್ರಮುಖವಾಗುತ್ತದೆ. ನವರಾತ್ರಿ ಕಳೆದು ಹತ್ತನೇ ದಿನ ಆಚರಿಸುವ ವಿಜಯದಶಮಿ, *ದೇಹ ಮತ್ತು ಮನಸ್ಸಿನ ಮೇಲೆ ಹಿಡಿತ ಸಾಧಿಸಿ ವಿಜಯವನ್ನು ಗಳಿಸುವ ಸಂದೇಶವನ್ನು ನೀಡುತ್ತದೆ...*
*"ದುರ್ಗಾ ದುರ್ಗತಿ ನಾಶಿನಿ"* ಅರ್ಥಾತ್ ದುರ್ಗತಿಯನ್ನು ನಾಶ ಮಾಡುವವಳು ದುರ್ಗೆ ⚔. *ದುರ್ಗಾ* ಎಂದರೆ *ಕೋಟೆ,* *ರಕ್ಷಣೆ* ಎನ್ನುವ ಅರ್ಥವೂ ಇದೆ. ಅಂದರೆ ಎಲ್ಲಾ ರೀತಿಯ ಕಷ್ಟಗಳಲ್ಲಿ ತಾಯಿ ದುರ್ಗೆಯ ಸ್ಮರಣೆ ಮಾಡಿದರೆ ಆಕೆ ಕೋಟೆಯಂತೆ ನಿಂತು ನಮ್ಮನ್ನು ರಕ್ಷಣೆ ಮಾಡುತ್ತಾಳೆ ಅನ್ನುವುದೊಂದು ನಂಬಿಕೆ....
ನವರಾತ್ರಿಯು ಒಂಭತ್ತು 9ರಾತ್ರಿಗಳನ್ನು ಪ್ರತಿನಿಧಿಸುತ್ತವೆ. *ರಾತ್ರಿ* ಅಂದರೆ *ಕತ್ತಲು,* *ಕತ್ತಲು* ಎಂದರೆ *ನಕಾರಾತ್ಮಕತೆ* (negativity).... ನಮ್ಮ ದೇಹದ ನವದ್ವಾರದ ಮೂಲಕ ಬರುವ *ಕಾಮ, ಕ್ರೋಧ,ಮೋಹ, ಲೋಭ, ಮದ, ಮತ್ಸರವನ್ನು* ನಾಶ ಮಾಡುವ ಸಂದೇಶ ನೀಡುತ್ತದೆ.
ದೇಹದ *ಸಪ್ತ ಚಕ್ರಗಳನ್ನು*ಈ ನವದುರ್ಗೆಯರು ಪ್ರತಿನಿಧಿಸಿ ಚಕ್ರಗಳನ್ನು ಜಾಗ್ರತಗೊಳಿಸಿ, ಪರಿಶುದ್ಧತೆಯಲ್ಲಿ ಸಿದ್ಧಿಗಳಿಸುವ ಸಂದೇಶವನ್ನು ನೀಡುತ್ತಾರೆ.
ದೇವಿಯ ಬಗೆ ಬಗೆಯ ರೂಪಗಳು
*ಪ್ರಕ್ರತಿ ಆರಾಧನೆ (ಶೈಲ ಪುತ್ರಿ)*
*ಜ್ಞಾನಾರ್ಜನೆ (ಬ್ರಹ್ಮಚಾರಿಣಿ)*
*ನಕಾರಾತ್ಮಕತೆಯ ನಾಶದಿಂದ ಮನಃಕ್ಲೇಶ ನಿವಾರಣೆ (ಚಂದ್ರಘಂಟ)*
*ನಗು ನಲಿವಿನಿಂದ ಸಕಾರಾತ್ಮಕ ಪ್ರಭೆ (ಕೂಷ್ಮಾಂಡ)*
*ಮಾತ್ರ್ ವಾತ್ಸಲ್ಯ ಕರುಣೆ (ಸ್ಕಂದ ಮಾತಾ)*
*ವಿಷಯಸುಖಗಳ ಮೇಲಿನ ಹಿಡಿತ (ಕಾತ್ಯಾಯಿನಿ)*
*ದುಷ್ಟತೆಗಳ ನಾಶ ಸತ್ಯ ನ್ಯಾಯ ಧರ್ಮಗಳ ಪಾಲನೆ (ಕಾಲರಾತ್ರಿ)*
*ಶಾಂತಿಯೊಂದಿಗೆ ಬದುಕಿನ ಪರಿಶುದ್ಧತೆ (ಮಹಾಗೌರಿ)*
*ಸಾರ್ಥಕ್ಯದ ಬದುಕಿನೊಂದಿಗೆ ಸಿದ್ಧಿ (ಸಿದ್ಧಿಧಾತ್ರಿ)*
ಬದುಕಿಗೆ ಪಾಠವೇ ಆಗಿದೆ.
*ಶಮಿ ಶಮಯತೆ ಪಾಪಂ, ಶಮಿ ಶತ್ರು ವಿನಾಶಿನಿ| ಅರ್ಜುನಸ್ಯ ಧನುರ್ಧಾರಿ, ರಾಮಸ್ಯ ಪ್ರಿಯದರ್ಶಿನಿ||
*ಶಮಿ (ಬನ್ನಿ)* ಮರ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಿದ್ದಾರೆ.. *ಬನ್ನಿಯ ಎಲೆ ಬಂಗಾರಕ್ಕೆ ಸಮ ಅಂತಾರೆ....* ಆದುದರಿಂದ ಇದರ ಎಲೆ ಕೊಟ್ಟು *" ಬನ್ನಿ ತಗೊಂಡು ಬಂಗಾರದ ಹಾಗೆ ಇರೋಣ"* ಅಂತ ಹೇಳಿ ಹಳೆ ಕೋಪ ಮನಸ್ತಾಪ ಮರೆತು ಮತ್ತೆ ಬೆರೆತು ಬಾಳುತ್ತಾರೆ.
ಈ ಒಂಭತ್ತು ದಿನಗಳ ವಿಶ್ಲೇಷಣೆಯು ನಮ್ಮೊಳಗಿನ *ಮಾನವತ್ವವನ್ನು* *ದೈವಿಕತ್ವದೆಡೆ* ಕೊಂಡೊಯ್ಯಲಿ ತನ್ಮೂಲಕ *"ಅಹಂ ಬ್ರಹ್ಮಾಸ್ಮಿ"*ಎನ್ನುವ ಕಲ್ಪನೆ ಮೂಡಲಿ ಎಂದು ಆಶಿಸುತ್ತಾ, ವಿಜಯದಶಮಿ ಶುಭಾಶಯಗಳು ಧನ್ಯವಾದಗಳು
ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು