Friday, 22 September 2017

ಚಂದ್ರಘಂಟಾ

ನವರಾತ್ರಿ  ಒಂಭತ್ತು ರಾತ್ರಿಗಳು ನಡೆದ *ದುಷ್ಟಸಂಹಾರವನ್ನು ಸಂಕೇತಿಸುತ್ತವೆ*. ಈ ದುಷ್ಟತೆಗಳು *ಮನಸ್ಸಿನ ಕ್ಲೇಶಗಳನ್ನೂ ಸಂಕೇತಿಸುತ್ತವೆ*. ಹಲವು ದೇವಿ ರೂಪಗಳು ಚಂದ್ರನನ್ನು ಧರಿಸಿರುವುದು ಕಾಣಬಹುದು. *ಚಂದ್ರ ಮನೋಕಾರಕ*. ಹಾಗಾಗಿ ಮನಃಕ್ಲೇಶ ಕಳೆಯುವಲ್ಲಿ ವಿಶೇಷ ಪಾತ್ರ ವಹಿಸುತ್ತದೆ.

ನವರಾತ್ರಿಯ ಮೂರನೇ 3 ದಿನ ಪೂಜಿಸುವ ದೇವಿ *"ಚಂದ್ರಘಂಟಾ"*: *ಪಾರ್ವತಿಯು (ಶೈಲಪುತ್ರಿ)🙎🏻 ಬ್ರಹ್ಮಚಾರಿಣಿಯಾಗಿ* 👱🏻‍ಶಿವನ ಕುರಿತು ತಪಸ್ಸಾಚರಿಸಿ ಶಿವನನ್ನು ಒಲಿಸಿಕೊಳ್ಳುತ್ತಾಳೆ 🙏. ಶಿವನು ಆಕೆಯನ್ನು ವರಿಸುವುದಾಗಿ ಮಾತುಕೊಡುತ್ತಾನೆ✋

ಪಾರ್ವತಿಯನ್ನು ವರಿಸುವ ಸಲುವಾಗಿ ತನ್ನ ಗಣಗಳ 👹👺👹 ಜೊತೆಗೆ ಶಿವನು  ಭೈರಾಗಿಯಂತೆ, ಸ್ಮಶಾನವಾಸಿಯಂತೆ ಪಾರ್ವತಿಯ ಮನೆಗೆ🏠 ಆಗಮಿಸುತ್ತಾನೆ. ಸ್ಮಶಾನವಾಸಿ ರೂಪಿನಲ್ಲಿರುವ ಶಿವನನ್ನು ಕಂಡು ಪಾರ್ವತಿಯ ತಾಯಿ ರೂಪ ಲಾವಣ್ಯದಿಂದ ಕೂಡಿದ ಮಗಳನ್ನು ಇಂತಹ ಶಿವನು ಮದುವೆಯಾಗುವುದೇ ಎಂದುಕೊಂಡು ಭೀತಗೊಂಡು  ಮೂರ್ಛಿತಳಾಗುತ್ತಾಳೆ 😳😳....

ಈ ಸಂದರ್ಭದಲ್ಲಿ ಪಾರ್ವತಿಯು ಅಲಂಕಾರಭರಿತಳಾಗಿ ಬಹುಸುಂದರವಾದ ರೂಪವನ್ನು ಧಾರಣೆಮಾಡುತ್ತಾಳೆ 👸 ಇದೆ  ಸಂದರ್ಭ ತನ್ನ ಹಣೆಯಲ್ಲಿ ಅರ್ಧಚಂದ್ರಾಕ್ರಿತಿಯನ್ನು 🌙 ಧರಿಸಿದಳು ಎಂಬ ಉಲ್ಲೇಖವಿದೆ... ಆ ಅರ್ಧಚಂದ್ರವು ಹಣೆಯಲ್ಲಿ ಘಂಟೆಯಂತೆ 🔔ಓಲಾಡುತಿತ್ತು ಆದುದರಿಂದ ಆಕೆಯನ್ನು *"ಚಂದ್ರಘಂಟಾ"* 🌙🔔ಎಂದು ಸ್ತುತಿಸಿದರು...

*ಚಂದ್ರಘಂಟಾ: ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ' ಅಂದರೆ  ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ.. 🌙🔔*

ಹಣೆಯಲ್ಲಿ ಧರಿಸಿದ ಚಂದ್ರಘಂಟೆಯ ಸದ್ದಿಗೆ 🔔ಹಲವು ದುಷ್ಟ ಶಕ್ತಿಗಳು💀💀 ನಾಶವಾದವು ಎಂಬ ಉಲ್ಲೇಖವಿದೆ... *ಘಂಟಾ ನಿನಾದಿಂದ ದುಷ್ಟಶಕ್ತಿಗಳು, ನಕಾರಾತ್ಮಕ ಶಕ್ತಿ  💀💀(negative energy) ಅನ್ನು ದೂರ ಮಾಡಬಹುದು ಎಂಬುವುದನು ಇಲ್ಲಿ ಸ್ಮರಿಸಬಹುದು.....*

ಚಂದ್ರ 🌙ಮನೋಕಾರಕ ಅರ್ಥಾತ್ ಮನಸ್ಸಿಗೆ ಸಂಬಂಧಪಟ್ಟವನು 🙇💭, ಗಂಟೆ 🔔 ದುಷ್ಟಶಕ್ತಿಗಳು, ನಕಾರಾತ್ಮಕ ಶಕ್ತಿ (negative energy) 💀💀ಅನ್ನು ದೂರ ಮಾಡುವಂತದ್ದು. ತಸ್ಮಾತ್ *ಚಂದ್ರಘಂಟಾಳನ್ನು ಸ್ತುತಿಸಿದರೆ ಮನಸ್ಸಿಗೆ ಸಂಬಂಧಿಸಿದ ಕ್ಲೇಶ, ದುಃಖ, ವಿಕಾರ ನಾಶವಾಗುತ್ತದೆ...* 🙇💭💀🌋

ಚಂದ್ರಘಂಟಾ ರೂಪವನ್ನು
ನೋಡಿದ ಶಿವ ತನ್ನ ಭೈರಾಗಿ 👹 ರೂಪವನ್ನು ತ್ಯಜಿಸಿ ಅಲಂಕ್ರತನಾದ ಸುಂದರಾಂಗನ 👤ರೂಪ ಧಾರಣೆ ಮಾಡಿದನು.... *ಹೆಣ್ಣು ಗಂಡನ್ನು ಪರಿವರ್ತಿಸಬಲ್ಲಳು ಎಂದೂ ಇದನ್ನು ಅರ್ಥೈಸಬಹುದು.... ಮನಸ್ಸು ವಿಕಾರರಹಿತವಾದಾಗ ಬೈರಾಗಿಯಂತ ಬದುಕು ಸುಂದರವಾಗುತ್ತದೆ ಎಂದೂ ಅರ್ಥೈಸಬಹುದು...*

*ಪ್ರಕ್ರಿತಿ 🍃🌿ಮತ್ತು ಪುರುಷ 👤 ತತ್ವವನ್ನು ಇದು ತಿಳಿಯಪಡಿಸುತ್ತದೆ....*

*ಯೋಗದಲ್ಲಿ ಈಕೆ ಮಣಿಪುರ ಚಕ್ರವನ್ನು ಪ್ರತಿನಿಧಿಸುತ್ತಾಳೆ 🐍....*

ಹತ್ತು ಕೈಗಳಲ್ಲಿ ಖಡ್ಗ, ತ್ರಿಶೂಲ, ಕಮಲ, ಕಮಂಡಲ ಮುಂತಾದವನ್ನು ಧರಿಸಿದ್ದು, ಈಕೆಯನ್ನು *ಚಾಮುಂಡ, ಚಂಡಿಕಾ* ಎಂಬೂದಾಗಿಯೂ ಕರೆಯುತ್ತಾರೆ

ಈಕೆಯನ್ನು *"ಪಿಂಡಜಪ್ರವರಾರೂಢಾಚಂದಕೋಪಾಸ್ತ್ರಕೈರ್ಯುತಾ |ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||"* ಎಂದು ಸ್ತುತಿಸಿ ಮನಃ ಕ್ಲೇಶ ದೂರ ಮಾಡಿ ನೆಮ್ಮದಿ ಕಾಣಬಹುದು....

ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ಸುಖ, ನೆಮ್ಮದಿ ಕರುಣಿಸಲಿ......

ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"

No comments:

Post a Comment

Note: only a member of this blog may post a comment.