Tuesday, 31 October 2017

ತುಳಸಿ ವಿವಾಹ

"ವೃಂದ್ಯಾಯ್ಯೆ, ತುಳಸಿ ದೇವ್ಯೆಯ್ಯೆ, ಪ್ರಿಯಾಯ್ಯೆ ಕೇಶವಸ್ಯ ಚ
ಕೃಷ್ಣ ಭಕ್ತಿ ಪ್ರದೆ ದೇವಿ, ಸತ್ಯವತ್ಯೆಯ್ಯೆ ನಮೋ ನಮಃ"
🌿🌿🌿🌿🌿🌿🌿🌿🌿🌿🌿
ಭಾರತೀಯ ಪರಂಪರೆಯಲ್ಲಿ ತುಳಸಿ ಗಿಡಕ್ಕೆ ಔಷಧೀಯ ಏವಂ ಪಾವಿತ್ರ್ಯದ ಸ್ಥಾನವನ್ನು ಕಲ್ಪಿಸಲಾಗಿದೆ... ಹಿಂದು ಧರ್ಮವು ತುಳಸಿಯನ್ನು ದೈವಿಕ ಎಂದೂ ಭಾವಿಸಿದೆ... ವೈಷ್ಣವಿ, ಹರಿಪ್ರಿಯಾ, ಶ್ರೀ ತುಳಸಿ, ರಾಮಾ ತುಳಸಿ, ಕೃಷ್ಣ ತುಳಸಿ ಮುಂತಾದ ಹೆಸರಿನಿಂದ ತುಳಸಿಯನ್ನು ಕರೆಯುತ್ತಾರೆ...
🌿🌿🌿🌿🌿🌿🌿🌿🌿🌿🌿
ವಿಷ್ಣುವಿಗೆ ಅತ್ಯಂತ ಪ್ರಿಯ ಎಂದು ಭಾಗವತ ಪುರಾಣ ಹಾಗೂ ಇತರೆ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ...
🌿🌿🌿🌿🌿🌿🌿🌿🌿🌿🌿
ಕೃಷ್ಣನನ್ನು ತುಳಸಿಯ ದಳದಿಂದ ತೂಗಿದ ಕಥೆ ಜನಜನಿತ... "ಒಲ್ಲನೊ ಹರಿ ಕೊಳ್ಳನೊ, ಎಲ್ಲಾ ಸಾಧನವಿದ್ದು ತುಳಸಿ ಇಲ್ಲದ ಪೂಜೆ" ಎಂದು ಪುರಂದರ ದಾಸರು ತುಳಸಿಯ ಪಾರಮ್ಯವನ್ನು ಹಾಡಿಕೊಂಡಾಡಿದ್ದಾರೆ....
🌿🌿🌿🌿🌿🌿🌿🌿🌿🌿🌿
ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯ ರಾತ್ರಿ ತುಳಸಿ ಗಿಡವನ್ನು ನೆಲ್ಲಿಯ ಗಿಡದೊಂದಿಗೆ ಪೂಜಿಸಿ ವಿವಾಹ ಸಂಪನ್ನಗೊಳಿಸಲಾಗುತ್ತದೆ... ಮುಂದೆ ಬರುವ ಮಾಘಮಾಸದ ಚಳಿಯ ಕುಳಿರ್ಗಾಳಿಗೆ ದೇಹಕ್ಕೆ ನೆಲ್ಲಿ ಮತ್ತು ತುಳಸಿ ಉತ್ತಮ ಔಷಧೀಯ ಸಸ್ಯಗಳು... ಈ ನಿಟ್ಟಿನಲ್ಲಿ ಇವುಗಳ ಪೂಜೆ ಸಾಂಕೇತಿಕವೂ ಹೌದು...
🌿🌿🌿🌿🌿🌿🌿🌿🌿🌿🌿
ಚಾತುರ್ಮಾಸ ಮುಗಿಸುವ ಸ್ವಾಮೀಜಿಗಳು ತುಳಸಿ ವಿವಾಹ ನೆರವೇರಿಸಿ ತಮ್ಮ ದೈನಂದಿನ
ವೃತದಲ್ಲಿ ಮುಂದುವರೆಯುತ್ತಾರೆ.... ತುಳಸಿ ವಿವಾಹವು ನಂತರದ ತಿಂಗಳುಗಳಲ್ಲಿ ಬರುವ ಮದುವೆಗಳಿಗೆ ಅಧಿಕೃತ ಚಾಲನೆಯೂ ಹೌದು...
🌿🌿🌿🌿🌿🌿🌿🌿🌿🌿🌿
ತುಳಸಿ ಬೃಂದಾವನವು ಸಕಲ ಆಯಃ, ಆರೋಗ್ಯ, ಸ್ವಸ್ಥ ಮನಸ್ಸು, ಐಶ್ವರ್ಯ ಸಿದ್ಧಿ ಕರುಣಿಸಿ ಕಾಪಾಡಲಿ.....

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.