ಕಪ್ಪಡರಿದ ಬಾನಿನ ಹಾಳೆಯ
ಮೇಲೆ ಬೆಳ್ಳಿ ಹಸ್ತಾಕ್ಷರಗಳು
ಯೋಗೀಶ್ ಮಲ್ಲಿಗೆಮಾಡು
ಇಂದು ಮುಂಜಾವಿಗೆ ಸದ್ದೇ ಇಲ್ಲದೆ ಸುರಿದ ಜಡಿ ಮಳೆಗೆ ಮೌನವಾಗಿ ಬೀಸಿದ ಗಾಳಿಯ ಸಾಥ್ ಇತ್ತು....
ಹೆಸರೇ ಹೇಳದೆ ಹಾಡಿದ ಹಕ್ಕಿಯ ಹಾಡಲ್ಲಿ ಅಹಂ ಇರಲಿಲ್ಲ....
ಎಲ್ಲೋ ಅರಳಿದ ಹೂವಿನ ಘಮ ತಾನು ಬಂದ ಊರಿನ ಹೆಸರೂ ತಿಳಿಸದೆ ಮೂಗಿಗೆ ಬಡಿದಿದೆ...
ಹರಿವ ನದಿ ನೆಲವ ಹಸಿರಾಗಿಸಿ ಪ್ರತಿಫಲವ ಬಯಸದೆ ಕಡಲ ತವಕಿಸಿ ಮುಂಬರಿದಿದೆ...
ಮನುಷ್ಯನೊಬ್ಬನೇ ತಾನೆ ಇಲ್ಲಿ ಹೆಸರಿಗಾಗಿ ತವಕಿಸಿ, ಆಂತರ್ಯದ ಸಂತಸವ ಮರೆತು ಬಡಬಡಿಸುತ್ತಿದ್ದಾನೆ.....!!!!
(ಹೆಸರಿಗಾಗಿ ಬರೆದ ಕವನವಲ್ಲ)
ಒಡೆದ ತುಟಿ, ಕೈಕಾಲುಗಳಿಗೆ ಇಲ್ಲಿದೆ
ವ್ಯಾಸಲಿನ್, ಕ್ರ್ಯಾಕ್ರೀಮುಗಳು
ಒಡೆದ ಸಂಬಂಧಗಳಿಗಿಲ್ಲಿ ಯಾವ ಲೇಪ....?
ಮುರಿದ ವಸ್ತುಗಳಿಗೆ ಫೆವಿಕಾಲ್, ಫೆವಿಕ್ವಿಕ್ಕುಗಳು
ಮುರಿದ ಮನಸುಗಳಿಗೆ ಇಲ್ಲಿ ಯಾವ ಅಂಟು ಮೇಣ...??
ಅನ್ನ ಹಳಸದೇ ಇರಲು ಇಲ್ಲಿ ರೆಫ್ರಿಜ್ಜರೇಟರುಗಳು
ಬಾಂಧವ್ಯ ಹಳಸದಿರಲು ಯಾವ ಪೆಟ್ಟಿಗೆ....???
ನಮ್ಮ ಸಂಭ್ರಮಗಳ ಹಂಚಿಕೊಳ್ಳಲು ಇಲ್ಲಿ ವಾಟ್ಸ್ ಆ್ಯಪ್, ಫೇಸ್ ಬುಕ್ಕುಗಳು
ಕುಳಿತು ದುಃಖವ ಕೇಳಲು ಯಾವ ಜಾಲತಾಣ....????
ದೂರದೂರದವರನು ಆಲಿಸಲು ಇಲ್ಲಿ ಕಾನ್ಫರೆನ್ಸ್, ಮೊಬೈಲು, ಸ್ಕೈಪುಗಳು
ಪಕ್ಕದ ಮನೆಯವರ ಕಷ್ಟ ಆಲಿಸಲು ಯಾವ ಕನೆಕ್ಷನ್...???
(ಯೋಗೀಶ್ ಮಲ್ಲಿಗೆಮಾಡು)