ಇಂದು ಮುಂಜಾವಿಗೆ ಸದ್ದೇ ಇಲ್ಲದೆ ಸುರಿದ ಜಡಿ ಮಳೆಗೆ ಮೌನವಾಗಿ ಬೀಸಿದ ಗಾಳಿಯ ಸಾಥ್ ಇತ್ತು....
ಹೆಸರೇ ಹೇಳದೆ ಹಾಡಿದ ಹಕ್ಕಿಯ ಹಾಡಲ್ಲಿ ಅಹಂ ಇರಲಿಲ್ಲ....
ಎಲ್ಲೋ ಅರಳಿದ ಹೂವಿನ ಘಮ ತಾನು ಬಂದ ಊರಿನ ಹೆಸರೂ ತಿಳಿಸದೆ ಮೂಗಿಗೆ ಬಡಿದಿದೆ...
ಹರಿವ ನದಿ ನೆಲವ ಹಸಿರಾಗಿಸಿ ಪ್ರತಿಫಲವ ಬಯಸದೆ ಕಡಲ ತವಕಿಸಿ ಮುಂಬರಿದಿದೆ...
ಮನುಷ್ಯನೊಬ್ಬನೇ ತಾನೆ ಇಲ್ಲಿ ಹೆಸರಿಗಾಗಿ ತವಕಿಸಿ, ಆಂತರ್ಯದ ಸಂತಸವ ಮರೆತು ಬಡಬಡಿಸುತ್ತಿದ್ದಾನೆ.....!!!!
(ಹೆಸರಿಗಾಗಿ ಬರೆದ ಕವನವಲ್ಲ)
No comments:
Post a Comment
Note: only a member of this blog may post a comment.