ನವರಾತ್ರಿಯ ಒಂಭತ್ತನೆ ದಿನ ಪೂಜಿಸಲ್ಪಡುವವಳು *ಸಿದ್ಧಿಧಾತ್ರಿ*
ಹೆಸರೇ ಸೂಚಿಸುವಂತೆ *ಸಿದ್ಧಿಧಾತ್ರಿ*ಬಗೆ ಬಗೆಯ ಸಿದ್ಧಿಗಳನ್ನು ನೀಡುವವಳು.
*ಅಷ್ಟಸಿದ್ಧಿಗಳಾದ "ಅನಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ, ಪ್ರಾಖ್ಯಮ್ಯ, ಇಷಿತ್ವ, ವಷಿತ್ವ"* ಇವುಗಳನ್ನು ನೀಡುತ್ತಾಳೆ ಎಂದೂ, *ಗಂಧರ್ವ, ಯಕ್ಷ, ಸಿದ್ಧ, ಅಸುರ, ದೇವತೆಗಳೆಲ್ಲರೂ* ಈಕೆಯನ್ನು ಪೂಜಿಸುತ್ತಾರೆ ಎಂದು ಉಲ್ಲೇಖಿಸಿದೆ. *ತಂತ್ರ ಮಾಡುವವರು, ಸಾಧಕರು, ಯೋಗಿಗಳು* ಈಕೆಯ ಪೂಜೆಯನ್ನು ಮಾಡಿ ಸಿದ್ಧಿಗಳಿಸುತ್ತಾರೆ ಎಂಬ ಪ್ರತೀತಿ ಇದೆ.
ಶಿವನು ಈಕೆಯನ್ನು ಪೂಜಿಸಿ ಸಿದ್ಧಿಯನ್ನು ಪಡೆದನು ಎಂದು ಉಲ್ಲೇಖಿಸಿದೆ. ಶಕ್ತಿಯನ್ನು ಒಲಿಸಿದ ಶಿವ *ಅರ್ಧನಾರೀಶ್ವರನಾದ*. ಗಂಡು ಹೆಣ್ಣು ಒಂದೇ ಎಂದು ಸಾರಿದ್ದು *ಅರ್ಧನಾರೀಶ್ವರ ತತ್ವ.*
ಈಕೆ ಕಮಲದ ಮೇಲೆ ಕುಳಿತಿದ್ದು *ಶಂಖ, ಚಕ್ರ, ಗಧಾ, ಪದ್ಮ ಧಾರಣೆ ಮಾಡಿದ್ದಾಳೆ.*
ಎಲ್ಲಾ ಚಕ್ರ ಜಾಗೃತವಾದ ಮೇಲೆ ಮನುಷ್ಯ *ಮಹಾಗೌರಿಯಂತೆ* ಪರಿಶುದ್ಧನಾದ ಮೇಲೆ ಎಲ್ಲಾ ರೀತಿಯ *ಸಿದ್ಧಿಯನು ಹೊಂದಬಹುದು.* ತಥಾ ಸಿದ್ಧಿಧಾತ್ರಿ ಸಿದ್ಧಿಯನ್ನ ತನ್ಮೂಲಕ ಕರುಣಿಸುತ್ತಾಳೆ.
ಪರ್ವತದ ತಪ್ಪಲಿನ ಮಣ್ಣೇ ಶೈಲಪುತ್ರಿಯಾಗಿ, ಅಲ್ಲಿ ಬೆಳೆಯುವ ಜ್ಞಾನವೇ ಬ್ರಹ್ಮಚಾರಿಣಿಯಾಗಿ, ಬೆಳೆಗಳ ನಡುವಿನ ಸವಾಲುಗಳನ್ನೆದುರಿಸುವುದೇ ಚಂದ್ರಘಂಟಾ ಎಂಬುದಾಗಿ, ಸಮರ್ಥ ಕೃಷಿ ಬದುಕಿನ ಯಶಸ್ಸಿನ ನಗುವೇ ಕೂಷ್ಮಾಂಡವಾಗಿ, ವಂಶ ಕುಲಗಳ ಮುಂದುವರಿಕೆಯೆ ಸ್ಕಂದ ಮಾತವಾಗಿ, ಮೋಹಗಳಿಗೆ ಒಳಗಾಗದಿರುವುದೇ ಕಾತ್ಯಾಯಿನಿಯಾಗಿ, ಪ್ರಕೃತಿಯ ಪ್ರಳಯ ಭೀಕರವೇ ಕಾಲರಾತ್ರಿಯಾಗಿ, ಶಾಂತ ಪ್ರಕೃತಿಯೇ ಮಹಾಗೌರಿಯಾಗಿ ಕಂಡುಕೊಂಡ ಮಾನವ ಇದೇ ಪರ್ವತದ ತಪ್ಪಲಿನಲ್ಲಿ ಬಗೆಬಗೆಯ ಸಿದ್ಧಿಯನ್ನು ಕಂಡುಕೊಂಡ. ಕೃಷಿಯೊಂದಿಗೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಬದುಕು ಸುಗಮಗೊಳಿಸಿದ. ಅಂದಿನಿಂದ ಇಂದಿನ ವರೆಗೂ ಮಾನವ ಹೊಸ ಹೊಸ ಕ್ರಾಂತಿಗೆ ಕಾರಣನಾದ. ಈ ಎಲ್ಲಾ ಸಿದ್ಧಿಯನ್ನು ಕರುಣಿಸಿದವಳು ಸಿದ್ಧಿಧಾತ್ರಿ ಎಂದು ಪರಿಭಾವಿಸಿದ
ನವರಾತ್ರಿಯು ಹಲವು ರೂಪಗಳ ಮೂಲಕ ಮಾನವರಿಗೆ ಅಗತ್ಯ ಸಂದೇಶಗಳನ್ನು ನೀಡಿ ತನ್ಮೂಲಕ ಬದುಕನ್ನು ಹೆಚ್ಚು *ಸಮರ್ಥವಾಗಿ ಬದುಕುವ ದಾರಿಯನ್ನು ತೋರುತ್ತವೆ.* ಆ ಮೂಲಕ ಬಗೆಬಗೆಯ *ಸಿದ್ಧಿಗಳನ್ನೂ ಕರುಣಿಸುವ ಮಹಾಪರ್ವ ನವರಾತ್ರಿ.*
*ಸಿದ್ಧಗಂಧರ್ವ ಯಕ್ಷದೈರಸುರೈರಮರೈರಪಿ| ಸೇವ್ಯಮಾನಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನಿ||*
ಸಿದ್ಧಿಧಾತ್ರಿ ಸಕಲ ಸಿದ್ಧಿಯನ್ನು ಕರುಣಿಸಲಿ
*ಆಯುಧಪೂಜೆಯನ್ನೂ* ಇದೆ ದಿನ ನೆರವೇರಿಸಲಾಗುತ್ತದೆ... *ಪಾಂಡವರು* ಇದೆ ದಿನ *ವನವಾಸದಿಂದ ವಾಪಾಸಾಗಿ ತಮ್ಮ ಶಸ್ತ್ರಗಳನ್ನು ತಾವು ಬಚ್ಚಿಟ್ಟ ಶಮಿ (ಬನ್ನಿ)🌿 ಮರದಿಂದ ತಗೆದು ಅದಕ್ಕೆ ಪೂಜೆಯನ್ನು ಸಲ್ಲಿಸಿದರು ಎಂಬ ಪ್ರತೀತಿ ಇದೆ.*
ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.