ಭಾದ್ರಪದ ಮಾಸದ ಮೊದಲ ಹಬ್ಬ ಗೌರಿಹಬ್ಬ.
ಗೌರಿ ಸಮೃದ್ಧಿಯ ಸಂಕೇತ, ಗಣಪತಿ ಶುಭ ಹಾಗೂ ಲಾಭದ ಸಂಕೇತ. ಹಾಗಾಗಿ ಎಲ್ಲಿ ಸಮ್ರದ್ಧಿ ಇರುತ್ತದೊ ಅಲ್ಲಿ ಶುಭ ಹಾಗೂ ಲಾಭ ಇರುತ್ತದೆ. ಅರ್ಥಾತ್ ಎಲ್ಲಿ ಮಳೆ ಬಿದ್ದು ಬೆಳೆ ಸಮೃದ್ಧವಾಗಿದೆಯೊ ಅಲ್ಲಿ ಶುಭ ಹಾಗೂ ಲಾಭ ನೆಲೆಸುತ್ತದೆ. ಆದುದರಿಂದ, ಗೌರಿ ಬಂದ ಮೇಲೆ ಗಣೇಶ ಬರುವುದು ಇದನ್ನೇ ಸಂಕೇತಿಸುತ್ತದೆ.
ಭಾದ್ರಪದ ಮಾಸ ಬೆಳೆ ಕೈಗೆ ಬರುವ ಕಾಲ ಹಾಗಾಗಿ ಕಣಜ ತುಂಬಿದ ಧವಸ ಧಾನ್ಯ ಸಮೃದ್ಧತೆಯನ್ನೂ ಹಾಗೂ ಗ್ರಹಿಣಿ ಮುಂದಿನ ಒಂದು ವರುಷ ಆ ಧವಸ ಧಾನ್ಯದಿಂದ ಮನೆ ನಿಭಾಯಿಸುವ ನಿಟ್ಟಿನಲ್ಲಿ ಮಂಗಳಗೌರಿಯನ್ನು ಪೂಜಿಸಿ ಸಮೃದ್ಧತೆಯನ್ನು ಸಂಕೇತಿಸುತ್ತಾರೆ.
ಶ್ರಾವಣದ ತನಕ ಹೊಲದಲ್ಲಿ ಬೆಳೆಗಾಗಿ ಕೆಲಸ ಮಾಡುವ ಹೆಂಗಸರ ಗಾಜಿನ ಬಳೆಗಳು ಒಡೆದು ಹೋಗುವುದು ಸಹಜ, ಮತ್ತೆ ಬಳೆ ಖರೀದಿಸಲು ಸಮ್ರದ್ಧ ಫಸಲು ಕೈ ಸೇರಬೇಕು ಹಾಗಾಗಿ ಗೌರಿ ಹಬ್ಬದಂದು ಮಹಿಳೆಯರು ಬಳೆ ತೊಡುತ್ತಾರೆ.
*ಗೌರಿ ಗಣೇಶ ಹಬ್ಬದ ಶುಭಾಶಯಗಳು*
ಹಬ್ಬವನ್ನು ಅರಿತು ಆಚರಿಸೋಣ
ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು