Tuesday, 26 May 2020

ಕೆಂಪು ದಾಸವಾಳ

ತಂಪು ಸೆಲೆಯ ನೀರಿನಲೆಯ
ತೊರೆಯ ಮಂದ ನಾದವು
ಹರಿವ ನೀರ ಸುರಿವ ನೆನಪ
ಕುಳಿತು ಕಳೆವ ಒಲವೊಳು

ಕಮಲ ಪಾದ ನೀರೊಳಿಟ್ಟು
ಬೆಳ್ಳಿ ಗೆಜ್ಜೆ ಘಲು ಘಲು
ಕೆಂಪು ದಾಸವಾಳ ಬಿರಿದು
ಪಾದ ಸುತ್ತ ಸುತ್ತಲು

ಯಾವ ಸಂಜೆ ಯಾವ ಘಳಿಗೆ
ನೀನು ಎಂದು ಬರುವೆಯೊ
ಕಾದು ಕೂತು ಕಾಯುತಿರುವೆ
ತಂಪು ನೀರ ದಡದೊಳು

ಬಂದು ಬಿಡು ಬೇಗ ನೀನು
ಜೊತೆಗೆ ಸಂಜೆ ಕಳೆಯುವ
ಸರಿದು ಬಿಡಲಿ ಕಾಲ ಹೀಗೆ
ನೀರೊಳದ್ದಿ ಪಾದವ

ನೀರಿಗಿಟ್ಟ ಪಾದದಲ್ಲಿ
ಬೆಳ್ಳಿಗೆಜ್ಜೆ ಸುತ್ತಿದೆ
ಕಮಲ ಪಾದವನ್ನು ನೋಡು
ಕೆಂಪು ಹೂವು ಮುತ್ತಿದೆ

ಯೋಗೀಶ್ ಮಲ್ಲಿಗೆಮಾಡು

ಮೇಲೆ ಕೆಳಗೆ ಮಾಡಿಯೂ ಓದ ಬಹುದಾದ ಕವಿತೆ ಇದು

ಹರಿವ ನೀರ ಸುರಿವ ನೆನಪ
ಕುಳಿತು ಕಳೆವ ಒಲವೊಳು
ತಂಪು ಸೆಲೆಯ ನೀರಿನಲೆಯ
ತೊರೆಯ ಮಂದ ನಾದವು

ಕೆಂಪು ದಾಸವಾಳ ಬಿರಿದು
ಪಾದ ಸುತ್ತ ಸುತ್ತಲು
ಕಮಲ ಪಾದ ನೀರೊಳಿಟ್ಟು
ಬೆಳ್ಳಿ ಗೆಜ್ಜೆ ಘಲು ಘಲು

ಕಾದು ಕೂತು ಕಾಯುತಿರುವೆ
ತಂಪು ನೀರ ದಡದೊಳು
ಯಾವ ಸಂಜೆ ಯಾವ ಘಳಿಗೆ
ನೀನು ಎಂದು ಬರುವೆಯೊ

ಸರಿದು ಬಿಡಲಿ ಕಾಲ ಹೀಗೆ
ನೀರೊಳದ್ದಿ ಪಾದವ
ಬಂದು ಬಿಡು ಬೇಗ ನೀನು
ಜೊತೆಗೆ ಸಂಜೆ ಕಳೆಯುವ

ಕಮಲ ಪಾದವನ್ನು ನೋಡು
ಕೆಂಪು ಹೂವು ಮುತ್ತಿದೆ
ನೀರಿಗಿಟ್ಟ ಪಾದದಲ್ಲಿ
ಬೆಳ್ಳಿಗೆಜ್ಜೆ ಸುತ್ತಿದೆ.

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.